ಪರ್ವಕಾಲ

ಸೂರ್ಯ

ನಸುಕಿನ ನಿನ್ನ ಹೂನಗೆ
ಮುದ್ದಿಸಿಕೊಳ್ಳಲು
ನಿನಗಿಂತ ಮೊದಲೇ ಎದ್ದು
ಕಿಟಕಿಯಲಿ ನಿನಗಾಗಿ ಕಾಯುತ್ತೇನೆ
ಬೆಳಗಿನ ಕಾಫಿಗಿಂತಲೂ
ಚೇತೋಹಾರಿ ನಿನ್ನದೊಂದು ಸ್ಪರ್ಷ
ಮಲ್ಲಿಗೆಯ ಘಮಲು ಆಹಾ!
ನೆಲತುಂಬ ಸುರಿದ ಪಾರಿಜಾತ ಕಿಡಕಿಯಾಚೆ
ಎದುರಿಗೆ ಬಂದೇಬಿಟ್ಟೆ
ಹೊಳೆವ ಕಿರಣ ಕಂಠೀಸರ
ಹವಳ ಮುತ್ತಾಗಿ ತುಂಬ
ಪಚ್ಚೆ ಮೈಮನ ವಸಂತಕಾಲ
ಸಾವಿರಾರು ಹೂಗಳು ಎದೆಯಾಳಕೆ
ದುಂಬಿ ದುಂಬಿ ಕಣಕಣದೊಳಗೆ.
ಕಣ್ತುಂಬ ಸಾರ್ಥಕ ಕೊಡ
ಮನತುಂಬ ಸಂಭ್ರಮ ಗಿರಿಪರ್ವ
ಮೌನಮಾತುಗಳ ಎದೆಗೂಡಿಗೆ
ಭಾವನೆಗಳ ಪರ್ವಕಾಲ
*****
ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೂರೆಗೆ ಹೆದರಿ ಕಂಬಳಿ ಬಿಸಾಕ್ತಾರೇನ್ರಿ
Next post ಯಾವ ಗಳಿಗೆಯಲ್ಲಿ ಒಳಗೆ ಹೇಗೆ ಬಂದೆ?

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

cheap jordans|wholesale air max|wholesale jordans|wholesale jewelry|wholesale jerseys